ಇಲ್ಲ

ಅಂಗಿಯೊಳ ಅಂಗಿಯಲ್ಲಡಗಿರುವ ಇವನು
ಒಂದೊಂದೇ ಪದರ ಕಳಚಿ
ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ
ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ
ಬಟ್ಟ ಬಯಲಾಗಲಿಲ್ಲ
ಬರೀ ಕಲ್ಲು ಕೆಸರುಗಳೇ ತುಂಬಿದ
ಸರೋವರದ ತಳದಲ್ಲಿ ರತ್ನ ಮುತ್ತುಗಳು
ಹೊಳೆಯಲೆ ಇಲ್ಲ
ಕತ್ತರಿ ಕೋಲುಗಳಿಗೆ ಸಿಕ್ಕಿ ಮೋಟಾದ
ಇವನ ಜೀವವೃಕ್ಷಕ್ಕೆ
ಚೈತನ್ಯದ ಕೊಂಬೆರೆಂಬೆಗಳೊಡೆಯಲೆ ಇಲ್ಲ
ಚೆಲುವಿನೆಲೆ ಹೂ ಹಣ್ಣುರಸ ಚಿಮ್ಮಲೇ ಇಲ್ಲ
ಆ ಹೂಗಳಿಗೆರಗುವ ದುಂಬಿಗಳಿಲ್ಲ
ಆ ಹಣ್ಣ ಕುಕ್ಕಿ ಸವಿಯೀಂಟುವ ಹಕ್ಕಿಗಳಿಲ್ಲ
ಆ ಕೊಂಬೆಗಳಲ್ಲಿ ಗೂಡು ಕಟ್ಟಿ ಕಲಕಲನಾದ ಹೊಮ್ಮಲೆ ಇಲ
ಕತ್ತಲ ಮೆತ್ತಿದೀ ಚಿತ್ರದಾಗಸದಲ್ಲಿ
ಚಿತ್ತಾರ ತಾರಗೆಗಳು ಮಿನುಗಲೆ ಇಲ್ಲ
ತಂಗದಿರ ಚಂದಿರನು ಆಡಲೆ ಇಲ್ಲ
ಬಲವಂತ ಬಾಯಿ ಹೊಲಿದ ಮೌನದಿಂದ
ಹಿಗ್ಗಿನ ಹಾಡೊಂದೂ ಸೆಲೆಯೊಡೆಯಲಿಲ್ಲ
ಮುಖ ಮುಚ್ಚಿದ ಮಬ್ಬು ಮೋಡದಂಚಿಗೆ
ತಿಳಿನಗೆಯ ತೆರೆಮಿಂಚು ಸುಳಿಯಲೆ ಇಲ್ಲ
ಬಗೆ ಮೊಗ್ಗು ಗಾಳಿಗೆದೆಯೊಡ್ಡಲರಳಲೆ ಇಲ್ಲ
ನುಸಿವಿಡಿದ ಮತಿಯಲ್ಲಿ ಚಿಕ್ಕೆ ಮೊಗ್ಗೆಯ ಸಾಲು
ಥಳಥಳಿಸಿ ಕಸವನ್ನು ಕಳೆಯಲೆ ಇಲ್ಲ
ಕುಳಿತು ಕೈಕಾಲು ಸೇದಿಹೋದ ಇವನ ನಡೆ
ನೂರಾರು ನರ್ತನ ಲೀಲೆಗಳ ಮೆರೆಯಲಿಲ್ಲ
ಮನಸಿನೊಳ ಮಂದಾರ ತಳ ಬಿಟ್ಟು ಮೇಲೆ ಬಂದು
ನೀರ ಮೇಲಲೆಗಳನು ಚುಂಬಿಸಲೆ ಇಲ್ಲ
ಬೆಳೆಯುತ್ತಲೇ ಬರದಾದ ಕೊರಡು ಕೈಗಳು
ಯಾವ ಕೋಮಲತೆಯನೂ ತಬ್ಬಲಿಲ್ಲ ತಬ್ಬಿ ಉಬ್ಬಲಿಲ್ಲ
ಹಿಮದಂಥ ಬಿಗಿದ ತುಟಿಯು
ಯಾವ ಮಧುವನು ಹೀರಿ ಸವಿಯಲೆ ಇಲ್ಲ
ಬರೀ ಕರಿಮೋಡವಾದಿವನ ಒಡಲಿಂದ
ಹೆಪ್ಪಮುರಿವ ಹೆಬ್ಬಯಕೆ ಧಾರೆಯಾಗಿಳಿಯಲೆ ಇಲ್ಲ
ಇಳಿದರೂ ಯಾವ ಬೀಜವೂ ಬಾಯ್ದೆರೆದು ಮೃತ್ಯುವನಣಕಿಸಲಿಲ್ಲ
ಮರುಭೂಮಿಯ ಒಣಮರಳಿನಲ್ಲಿ
ಯಾವ ಹಸಿಮಣ್ಣು ಉಸಿರಾಡಿ ಚಿಗುರಲೆ ಇಲ್ಲ
ಅಲೆದಾಡಿದರೂ ಯಾವ ಕಣ್ಣಬಟ್ಟಲೂ ತುಂಬಿ ಹನಿಸಲೆ ಇಲ್ಲ
ಯಾವ ಗಂಟಲು ತುಂಬಿ ತಿನಿಸಲೆ ಇಲ್ಲ
ಯಾವ ಹಕ್ಕಿಯು ಹಾಡಿ ಹರಸಲೆ ಇಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಳದ ಮಲ್ಲಿಗೆ
Next post ಕೊಮಾಸಾಮಿ ಕಾಮ್ ಕ ಚೋರು ಖಾನೆ ಮೆ ಜೋರು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys